November 1, 2023 [Digest]
November 1, 2023 [Digest]
November 1, 2023
1. ‘ವಿಜಿಲೆನ್ಸ್ ಅವೇರ್ನೆಸ್ ವೀಕ್ 2023’ ಯ ವಿಷಯ ಏನು?
[A] ಸಮಗ್ರತೆ ಮತ್ತು ನೈತಿಕತೆ
[B] ಭ್ರಷ್ಟಾಚಾರ ಬೇಡ ಎಂದು ಹೇಳಿ, ರಾಷ್ಟ್ರಕ್ಕೆ ಬದ್ಧರಾಗಿರಿ
[C] ಜಾಗರೂಕರಾಗಿರಿ; ಪ್ರಾಮಾಣಿಕವಾಗಿರಿ
[D] ಮಾಹಿತಿಯು ಶಕ್ತಿಯಾಗಿದೆ
Show Answer
Correct Answer: B [ಭ್ರಷ್ಟಾಚಾರ ಬೇಡ ಎಂದು ಹೇಳಿ, ರಾಷ್ಟ್ರಕ್ಕೆ ಬದ್ಧರಾಗಿರಿ]
Notes:
ವಿಜಿಲೆನ್ಸ್ ಜಾಗೃತಿ ಸಪ್ತಾಹ, 2023 ಅನ್ನು ಕೇಂದ್ರ ಜಾಗೃತ ಆಯೋಗ ಮತ್ತು ದೇಶದಾದ್ಯಂತ ಎಲ್ಲಾ ಸಂಸ್ಥೆಗಳು ಅಕ್ಟೋಬರ್ 30 ರಿಂದ ನವೆಂಬರ್ 5 ರವರೆಗೆ ಆಚರಿಸುತ್ತಿವೆ. ಈ ವರ್ಷದ ಧ್ಯೇಯವಾಕ್ಯ – ಭ್ರಷ್ಟಾಚಾರ ಬೇಡ ಎಂದು ಹೇಳಿ, ರಾಷ್ಟ್ರಕ್ಕೆ ಬದ್ಧರಾಗಿರಿ.
ಸಾರ್ವಜನಿಕ ಜೀವನದಲ್ಲಿ ಸಮಗ್ರತೆ ಮತ್ತು ನೈತಿಕತೆಯ ಪ್ರಾಮುಖ್ಯತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಪ್ರತಿ ವರ್ಷ ವಿಜಿಲೆನ್ಸ್ ಜಾಗೃತಿ ಸಪ್ತಾಹವನ್ನು ವ್ಯಾಪಕ ಕ್ರಮವಾಗಿ ಆಚರಿಸಲಾಗುತ್ತದೆ.
2. ಇತ್ತೀಚೆಗೆ ಪ್ರಾರಂಭಿಸಲಾದ ‘ಆಪರೇಷನ್ ಶೇಷಾ’, ___________ ನ ಅಕ್ರಮ ವ್ಯಾಪಾರವನ್ನು ತಡೆಯುವ ಗುರಿಯನ್ನು ಹೊಂದಿದೆ.
[A] ಆಮೆಗಳು
[B] ಮರ ಅಥವಾ ಟಿಂಬರ್
[C] ಎಕ್ಸಾಟಿಕ್ ಪಕ್ಷಿಗಳು
[D] ಆನೆಯ ದಂತ ಅಥವಾ ಟಸ್ಕ್
Show Answer
Correct Answer: B [ಮರ ಅಥವಾ ಟಿಂಬರ್ ]
Notes:
ರೆಡ್ ಸ್ಯಾಂಡರ್ಸ್ ಸೇರಿದಂತೆ ಮರದ ಅಕ್ರಮ ವ್ಯಾಪಾರವನ್ನು ತಡೆಯಲು ಕೇಂದ್ರ ಹಣಕಾಸು ಸಚಿವರು ‘ಆಪರೇಷನ್ ಶೇಷಾ’ 4 ನೇ ಹಂತವನ್ನು ಪ್ರಾರಂಭಿಸಿದರು.
ಅವರು ನವದೆಹಲಿಯಲ್ಲಿ ಜಾರಿ ವಿಷಯಗಳಲ್ಲಿ ಸಹಕಾರದ ಮೊದಲ ಜಾಗತಿಕ ಸಮ್ಮೇಳನ (ಗ್ಲೋಬಲ್ ಕಾನ್ಫರೆನ್ಸ್ ಆನ್ ಕೋ ಆಪರೇಷನ್ ಇನ್ ಎನ್ಫೋರ್ಸ್ಮೆಂಟ್ ಮ್ಯಾಟರ್ಸ್ – GCCEM) ನ ಉದ್ಘಾಟನಾ ಅಧಿವೇಶನದಲ್ಲಿ ಇದನ್ನು ಪ್ರಾರಂಭಿಸಿದರು. 40 ಕ್ಕೂ ಹೆಚ್ಚು ಕಸ್ಟಮ್ ಸಂಸ್ಥೆಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
3. ಇತ್ತೀಚೆಗೆ ನಿಧನರಾದ ಸಲೀಮುಲ್ ಹಕ್ ಅವರು ಯಾವ ವೃತ್ತಿಯೊಂದಿಗೆ ಸಂಬಂಧ ಹೊಂದಿದ್ದರು?
[A] ವಿಜ್ಞಾನಿ
[B] ಹವಾಮಾನ ಬದಲಾವಣೆ ತಜ್ಞ
[C] ಅರ್ಥಶಾಸ್ತ್ರಜ್ಞ
[D] ಬರಹಗಾರ
Show Answer
Correct Answer: B [ಹವಾಮಾನ ಬದಲಾವಣೆ ತಜ್ಞ]
Notes:
ಹವಾಮಾನ ನ್ಯಾಯದ ಪ್ರಮುಖ ವಕೀಲ ಮತ್ತು ಢಾಕಾದಲ್ಲಿನ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ಅಂಡ್ ಡೆವಲಪ್ಮೆಂಟ್ (ICCCAD) ನ ನಿರ್ದೇಶಕ ಪ್ರೊಫೆಸರ್ ಸಲೀಮುಲ್ ಹಕ್ ಅವರು 71 ನೇ ವಯಸ್ಸಿನಲ್ಲಿ ನಿಧನರಾದರು.
ಅವರು ಹವಾಮಾನ ಬದಲಾವಣೆ, ಪರಿಸರ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಗೌರವಾನ್ವಿತ ಪರಿಣತರಾಗಿದ್ದರು. ಪ್ರೊಫೆಸರ್ ಹಕ್ ಅವರು ಅಭಿವೃದ್ಧಿಶೀಲ ರಾಷ್ಟ್ರಗಳು, ವಿಶೇಷವಾಗಿ ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ (ಲೀಸ್ಟ್ ಡೆವಲಪ್ಡ್ ಕಂಟ್ರೀಸ್ – LDCs) ಮೇಲೆ ಕೇಂದ್ರೀಕರಿಸುವ ಮೂಲಕ ಹವಾಮಾನ ಬದಲಾವಣೆಯ ತಗ್ಗಿಸುವಿಕೆ, ಹೊಂದಾಣಿಕೆ ಮತ್ತು ಸುಸ್ಥಿರ ಅಭಿವೃದ್ಧಿಯ ನಡುವಿನ ಸಂಪರ್ಕವನ್ನು ಸ್ಥಾಪಿಸಲು ತಮ್ಮ ಕೆಲಸವನ್ನು ಸಮರ್ಪಿಸಿದರು.
4. NPS ನಿಧಿ ಹಿಂತೆಗೆದುಕೊಳ್ಳುವಿಕೆಗಾಗಿ ಯಾವ ಸಂಸ್ಥೆಯು ‘ಪೆನ್ನಿ ಡ್ರಾಪ್’ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ?
[A] IRDAI
[B] PFRDA
[C] SEBI
[D] RBI
Show Answer
Correct Answer: B [ PFRDA]
Notes:
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ – ಪಿಎಫ್ಆರ್ಡಿಎ) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ನ್ಯಾಷನಲ್ ಪೆನ್ಷನ್ ಸಿಸ್ಟಮ್ – ಎನ್ಪಿಎಸ್), ಅಟಲ್ ಪಿಂಚಣಿ ಯೋಜನೆ ಮತ್ತು ಎನ್ಪಿಎಸ್ ಲೈಟ್ನ ಚಂದಾದಾರರು ಹಣವನ್ನು ಹಿಂಪಡೆಯಲು ‘ಪೆನ್ನಿ ಡ್ರಾಪ್’ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ ಮತ್ತು ಬ್ಯಾಂಕ್ ಖಾತೆ ವಿವರಗಳಲ್ಲಿನ ಮಾರ್ಪಾಡುಗಳನ್ನು ಮಾಡಿದೆ.
ಪ್ರಕ್ರಿಯೆಯ ಅಡಿಯಲ್ಲಿ, ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಗಳು (CRA) ಉಳಿತಾಯ ಬ್ಯಾಂಕ್ ಖಾತೆಯ ಸಕ್ರಿಯ ಸ್ಥಿತಿಯನ್ನು ಪರಿಶೀಲಿಸುತ್ತದೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯಲ್ಲಿರುವ ಹೆಸರನ್ನು PRAN ನಲ್ಲಿರುವ ಹೆಸರಿನೊಂದಿಗೆ ಅಥವಾ ಸಲ್ಲಿಸಿದ ದಾಖಲೆಗಳ ಪ್ರಕಾರ ಹೊಂದಿಸುತ್ತದೆ.
5. ಯಾವ ರಾಜ್ಯ/UT ‘ಅಬುವಾ ಆವಾಸ್ ಯೋಜನೆ’ಯನ್ನು ಪ್ರಾರಂಭಿಸಿತು?
[A] ಗುಜರಾತ್
[B] ಜಾರ್ಖಂಡ್
[C] ಅಸ್ಸಾಂ
[D] ಪಶ್ಚಿಮ ಬಂಗಾಳ
Show Answer
Correct Answer: B [ಜಾರ್ಖಂಡ್]
Notes:
ಜಾರ್ಖಂಡ್ ಕ್ಯಾಬಿನೆಟ್, ಕಳೆದ ವಾರ, ಬಡವರಿಗೆ ವಸತಿ ಯೋಜನೆಯಾದ ‘ಅಬುವಾ ಆವಾಸ್ ಯೋಜನಾ’ (AAY) ಗೆ ಅನುಮೋದನೆ ನೀಡಿತು, ಇದು ರಾಜ್ಯದಲ್ಲಿ ವಸತಿ ರಹಿತರಿಗೆ ಎಂಟು ಲಕ್ಷ ಪಕ್ಕಾ ಮನೆಗಳನ್ನು ಒದಗಿಸುತ್ತದೆ ಮತ್ತು ಒಟ್ಟು 16,320 ಕೋಟಿ ರೂಪಾಯಿಗಳ ಬಜೆಟ್ ಹೊಂದಿದೆ.
ಈ ಯೋಜನೆಯನ್ನು ಮೂರು ಹಂತಗಳಲ್ಲಿ ಜಾರಿಗೊಳಿಸಲಾಗುವುದು, ಪ್ರಸಕ್ತ ಹಣಕಾಸು ವರ್ಷದಲ್ಲಿ 2 ಲಕ್ಷ ಮನೆಗಳ ಗುರಿಯನ್ನು ಹೊಂದಿದೆ; FY 2024-25 ರಲ್ಲಿ 3.5 ಲಕ್ಷ ಮನೆಗಳು ಮತ್ತು FY 2025-26 ರಲ್ಲಿ 2.5 ಲಕ್ಷ ಮನೆಗಳು.
Comments